ಮಂಡ್ಯದಿಂದ ಲೋಕಸಭೆ ಹಾಗೂ ರಾಮನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಮಾಜಿ ಎಚ್ ಡಿ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ರಾಜಕೀಯದಿಂದ ದೂರ ಇರಲು ತೀರ್ಮಾನಿಸಿದ್ದಾರೆ. ಗನ್ ಮ್ಯಾನ್ ಮದುವೆಗೆ ಬೀದರಗೆ ಬಂದಿದ್ದ ನಿಖಿಲ್ ಕುಮಾರಸ್ವಾಮಿ, ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿದ್ದು ಬಹಳ ಕಷ್ಟ. ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡ್ತೇನೆ ಎಂದಿರುವ ನಿಖಿಲ್ ನಾನೀಗ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದೇನೆ. ಬೀದರ ಜಿಲ್ಲೆಯಲ್ಲಿ ಜೆಡಿಎಸ್ ಉತ್ತಮ ಸಂಘಟನೆ ಇದೆ ಎಂದ ನಿಖಿಲ್, ದೊಡ್ಡ ಗೌಡ್ರು ಮತ್ತು ಕುಮಾರಣ್ಣನವರು ಪಕ್ಷದ ಸಂಘಟನೆ ಎಂದು ಹೇಳಿದರು.
