ಡಿ ಸಿ ಎಮ್ ಸೃಷ್ಟಿ ಕುರಿತಂತೆ ರಾಜ್ಯದಲ್ಲಿ ಭುಗಿಲೆದ್ದಿರುವ ಡಿ ಸಿ ಎಮ್ ಹೇಳಿಕೆ ವಿಚಾರ ಅನವಶ್ಯಕ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಸಧ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇದ್ದಾರೆ. ಮತ್ತಷ್ಟು ಡಿ ಸಿ ಎಮ್ ಹುದ್ದೆ ಸೃಷ್ಟಿ ಮಾಡುವದು ಹೈಕಮಾಂಡಗೆ ಬಿಟ್ಟ ವಿಷಯ, ಆದ್ರೆ ಸಧ್ಯ ಆ ವಿಷಯ ಅಪ್ರಸ್ತುತ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿನ ಸಚಿವರುಗಳು ಡಿ ಸಿ ಎಮ್ ಹುದ್ದೆ ಸೃಷ್ಟಿಯ ಬಗ್ಗೆ ಒಬ್ಬರ ಮೇಲೊಬ್ಬರಂತೆ ಹೇಳಿಕೆ ಕೊಡುತ್ತಿದ್ದು,ರಾಮಲಿಂಗಾರೆಡ್ಡಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.