ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಪಕ್ಷದ ಚಟುವಟಿಕೆಯಿಂದ ದೂರ ಇರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಸಿ ಎಮ್ ಇಬ್ರಾಹಿಂ ರನ್ನು ನಾವು ಜೆಡಿಎಸ್ ಗೆ ಬನ್ನಿ ಅಂತ ಕರೆದಿರಲಿಲ್ಲ. ಸಿ ಎಮ್ ಇಬ್ರಾಹಿಂ ತಾವಾಗಿಯೇ ಜೆಡಿಎಸ್ ಗೆ ಬಂದಿದ್ದರು ಎಂದಿದ್ದಾರೆ. ಆದರೂ ಅವರಿಗೆ ರಾಜ್ಯ ಅಧ್ಯಕ್ಷ ಸ್ಥಾನ ನೀಡಿ ಗೌರವಯುತವಾಗಿ ನಡೆಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಮೈತ್ರಿ ಮಾತುಕತೆಯಿಂದ ಮುನಿಸಿಕೊಂಡಿರುವ ಇಬ್ರಾಹಿಂ, ಕುಮಾರಸ್ವಾಮಿಯವರು ಮತ್ತು ದೇವೇಗೌಡರು ಕರೆ ಮಾಡಿದರು ಸ್ವೀಕರಿಸದ ಹಿನ್ನೇಲೆಯಲ್ಲಿ ಕುಮಾರಸ್ವಾಮಿಯವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರ ಹಿನ್ನೆಲೆಯಲ್ಲಿ , ಸಿ ಎಮ್ ಇಬ್ರಾಹಿಂ, ಅಕ್ಟೋಬರ್ 16 ರಂದು ಸಭೆ ಕರೆದಿದ್ದು, ಸಭೆಗೂ ಮುನ್ನವೇ ಕುಮಾರಸ್ವಾಮಿ ಈ ಮಾತು ಆಡಿರುವದು ಮಹತ್ವ ಪಡೆದುಕೊಂಡಿದೆ.