ಶಿವಾಜಿ ಮಹಾರಾಜರು ಧರ್ಮದ ಸ್ಥಾಪಕರು ನಿಜ. ಆದರೆ ಮುಸ್ಲಿಂ ವಿರೋದಿಗಳಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಮಾರ್ಮಿಕವಾಗಿ ಹೇಳಿದ್ದಾರೆ. ಅವರು ಬಾಗಲಕೋಟೆಯಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಸಭೆಯಲ್ಲಿ ಮಾತನಾಡುತ್ತಾ ಮರಾಠಾ ಸಮಾಜದವರು ಮೈಮರೆಯಬಾರದು ಎಂದು ಕರೆ ನೀಡಿದರು. ಶಿವಾಜಿ ಮಹಾರಾಜ ಮತ್ತು ಅಫ್ಜಲ್ ಖಾನ್ ನ ಇತಿಹಾಸ ಓದಿ ಎಂದು ಕರೆ ನೀಡಿದರು. ಕೆಲ ಸಮಾಜಘಾತುಕ ಶಕ್ತಿಗಳು ನನ್ಮ ಸಮಾಜದ ಯುವಕರಲ್ಲಿ ಕೋಮು ಭಾವನೆ ಬಿತ್ತುತ್ತಿದ್ದಾರೆ. ಶಿವಾಜಿ ಮಹಾರಾಜರು ಎಂದಿಗೂ ಮುಸ್ಲಿಂರನ್ನು ವಿರೋದ ಮಾಡಲಿಲ್ಲ ಅನ್ನೋದನ್ನು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು. ಚುನಾವಣೆ ಬಂದಾಗ ಶಿವಾಜಿ ನೆನೆಪು ಮಾಡಿಕೊಳ್ಳುತ್ತಾರೆ, ಚುನಾವಣೆ ಬಳಿಕ ಮರಾಠಾ ಸಮಾಜ ಮರೆಯುತ್ತಾರೆ ಎಂದರು. ಎಲ್ಲ ವೈಮನಸ್ಸು ಮರೆತು ನಾವೆಲ್ಲಾ ಒಂದಾಗಬೇಕು ಎಂದು ಸಂತೋಷ ಲಾಡ್ ಕರೆ ನೀಡಿದರು.