Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ರಾಜಕೀಯ ಸಂಚಲನ ಮೂಡಿಸಿದ ಅಣ್ಣಿಗೇರಿ ಪುರಸಭೆ ಕಾಂಗ್ರೇಸ್ ಗೆ ಖೆಡ್ಡಾ, ಬಿಜೆಪಿ ಅಡ್ಡಾ.

ನಿನ್ನೇ ನಡೆದ ಅಣ್ಣಿಗೇರಿ ಪುರಸಭೆ.  ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರ ಬೆಂಬಲದಿಂದ ಅಧ್ಯಕ್ಷೆಯಾದ ಮೆಹಬೂಬಿ ನವಲಗುಂದ ಇವರಿಗೆ ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಸನ್ಮಾನಿಸಿದ್ದು, ಧಾರವಾಡ ಜಿಲ್ಲೆಯ ರಾಜಕಾರಣದಲ್ಲಿ ದೊಡ್ಡ ಸುದ್ದಿ ಮಾಡಿದೆ. ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರ ಸಮ್ಮುಖದಲ್ಲಿಯೇ ಬಿಜೆಪಿಯ ಐವರು ಪುರಸಭೆ ಸದಸ್ಯರು, ಕಾಂಗ್ರೇಸ್ ನಿಂದ ಆಯ್ಕೆಯಾದ ಸದಸ್ಯೆ ಮೆಹಬೂಬಿ ನವಲಗುಂದ ಪರ ಮತ ಚಲಾಯಿಸಿ, ಮೆಹಬೂಬಿಯನ್ನು ಅಧ್ಯಕ್ಷೆಯನ್ನಾಗಿ ಮಾಡಿದರು. ಕಾಂಗ್ರೇಸ್, ಅಧ್ಯಕ್ಷ ಸ್ಥಾನಕ್ಕೆ ತನ್ನ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮುಖಭಂಗ ಅನುಭವಿಸಿದರೆ, ಬಿಜೆಪಿ ಪರಿಸ್ಥಿತಿಯ ಲಾಭ ಪಡೆಯಿತು.

 

ಅಣ್ಣಿಗೇರಿ ಪುರಸಭೆಯಲ್ಲಿ ಸರಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಬೇಕಿದ್ದ ಕಾಂಗ್ರೇಸ್, ವಿಫಲವಾಗಿದ್ದು, ಕಾಂಗ್ರೇಸ್ ಪುರಸಭೆ ಸದಸ್ಯರ ಕಿತ್ತಾಟದಿಂದ ಪರಿಸ್ಥಿತಿಯ ಲಾಭ ಪಡೆದ ಬಿಜೆಪಿ ಕಾಂಗ್ರೇಸ್ ಗೆ ಖೇಡ್ಡಾ ತೋಡಿತು. ಪರಿಣಾಮ ವಿಜಯೋತ್ಸವದ ಮೆರವಣಿಗೆಯಲ್ಲಿ ಕಾಂಗ್ರೇಸ್ ಬಾವುಟದ ಜೊತೆ ಬಿಜೆಪಿ ಭಾವುಟವೂ ಒಟ್ಟಿಗೆ ಹಾರಾಡಿದವು.

ನವಲಗುಂದ ವಿಧಾನಸಭಾ ಮತಕ್ಷೇತ್ರದ ಜನಪ್ರಿಯ ಶಾಸಕ ಎನ್ ಎಚ್ ಕೋನರೆಡ್ಡಿಯವರಿಗೆ ತವರಿನಲ್ಲಿಯೇ ಸ್ವಲ್ಪಮಟ್ಟಿನ ಹಿನ್ನೇಡೆಯಾದ ಬೆನ್ನಲ್ಲೆ, ಇಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಹಿಜಾಬ್ ಧರಿಸಿ ಬಂದ ನೂತನ ಅಧ್ಯಕ್ಷೆ ಮೆಹಬೂಬಿಯವರಿಗೆ ಸನ್ಮಾನಿಸಿದ್ದು, ಹಿಜಾಬ್ ಬೇರೆ, ರಾಜಕಾರಣ ಬೇರೆ ಅನ್ನುವಂತಿತ್ತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!