ಜನರಿಗೆ ಸುಗಮ ಆಡಳಿತ ಕೊಡಲು ಕಾಂಗ್ರೇಸ್ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಸಾಮಾಜಿಕ, ಆರ್ಥಿಕ, ಭೌತಿಕ ಅಭಿವೃದ್ಧಿ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿಗೆ ಒಬ್ಬರಂತೆ ಕೆ ಎ ಎಸ್ ಅಧಿಕಾರಿಗಳನ್ನು ಆಯಾ ತಾಲೂಕಿನ ಉಸ್ತುವಾರಿ ಅಧಿಕಾರಿ ಎಂದು ನೇಮಿಸಿ ಆದೇಶ ಹೊರಡಿಸಿದೆ.
ಧಾರವಾಡ ಜಿಲ್ಲೆಯ ವಿವಿಧ ತಾಲೂಕು ಉಸ್ತುವಾರಿಗಳಾಗಿ ನೇಮಕಗೊಂಡ ಅಧಿಕಾರಿಗಳು ಇಂತಿದ್ದಾರೆ
ಧಾರವಾಡ – ಗೀತಾ ಸಿ ಡಿ
ಹುಬ್ಬಳ್ಳಿ – ಬಸವರಾಜ ಸೋಮಣ್ಣನವರ
ಹುಬ್ಬಳ್ಳಿ ನಗರ – ಆಜೀಜ್ ದೇಸಾಯಿ
ಹುಬ್ಬಳ್ಳಿ – ಬಸವರಾಜ ಆರ್ ಸೋಮಣ್ಣವರ
ಕಲಘಟಗಿ – ಮೇಜರ ಸಿದ್ದಲಿಂಗಯ್ಯ ಹಿರೇಮಠ
ಕುಂದಗೋಳ – ಡಾ. ರುದ್ರೇಶ್ ಘಾಳಿ
ಅಳ್ನಾವರ – ಈಶ್ವರ ಉಳ್ಳಾಗಡ್ಡಿ
ಅಣ್ಣಿಗೇರಿ – ಜಯಶ್ರೀ ಶಿಂತ್ರಿ
ನವಲಗುಂದ – ವೈ ಎಸ್ ಭಜಂತ್ರಿ
ಇವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇಷ್ಟು ವರ್ಷಗಳ ಕಾಲ ಜಿಲ್ಲೆಗೆ ಉಸ್ತುವಾರಿ ಕಾರ್ಯದರ್ಶಿ ನೇಮಕ ಮಾಡಲಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಪ್ರತಿ ತಾಲೂಕಿಗೆ ಉಸ್ತುವಾರಿ ಅಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದೆ.