Download Our App

Follow us

Search
Close this search box.
Home » ಕರ್ನಾಟಕ » ಭರತ ಬೊಮ್ಮಾಯಿ ವಿರುದ್ಧ ಪಂಚಮಸಾಲಿ ನಾಯಕರ ಸೆಡ್ಡು. ಜಿ ಜಿ ದ್ಯಾವನಗೌಡರ ಕಣಕ್ಕೆ ಇಳಿಸಲು ನಿರ್ಧಾರ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 1962 ರಿಂದ ಇಲ್ಲಿಯವರೆಗೆ ಗೆದ್ದವರಾರು, ಸೋತವರಾರು.. ಡಿಟೇಲ್ ರಿಪೋರ್ಟ್

ರಾಜ್ಯದ ಅತ್ಯಂತ ಪ್ರತಿಷ್ಟಿತ ಲೋಕಸಭಾ ಕ್ಷೇತ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಒಂದು ಕಾಲಕ್ಕೆ ಕಾಂಗ್ರೇಸ್ ಭದ್ರಕೋಟೆ, ಸಧ್ಯ ಆ ಭದ್ರಕೋಟೆಯನ್ನು ಭೇಧಿಸಿದ್ದು ಬಿಜೆಪಿ. 

1962 ರಿಂದ ಕಾಂಗ್ರೇಸ್ಸಿನಿಂದ, ಸರೋಜಿನಿ ಮಹಿಷಿ ಮತ್ತು ಡಿ ಕೆ ನಾಯ್ಕರ ಅವರು ಆಯ್ಕೆಯಾಗುತ್ತ ಬಂದ ಈ ಕ್ಷೇತ್ರವನ್ನು ಬಿಜೆಪಿ 1996 ರಲ್ಲಿ ತನ್ನ ತೆಕ್ಕೆಗೆ ಹಾಕಿಕೊಂಡಿತು. 1996 ರಲ್ಲಿ ವಿಜಯ ಸಂಕೇಶ್ವರ 11 ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.

ಅಲ್ಲಿಂದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸುತ್ತ ಹೊರಟ ಬಿಜೆಪಿ ಈ ಕ್ಷೇತ್ರವನ್ನು ಭದ್ರವಾಗಿ ಇಟ್ಟುಕೊಂಡಿದೆ. ವಿಜಯ ಸಂಕೇಶ್ವರ ಅವರ ನಂತರ ಆ ಸ್ಥಾನದಲ್ಲಿ ಗಟ್ಟಿಯಾಗಿ ಬೇರೂರಿದವರು ಪ್ರಲ್ಲಾದ ಜೋಶಿ. ಕೇಂದ್ರ ಸಚಿವರಾಗಿರುವ ಜೋಶಿ, ಸಧ್ಯ ಪಕ್ಷದ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದ್ದಾರೆ. ನಾಲ್ಕು ಸಲ ಸಂಸದರಾಗಿ, ಈ ಸಲ 5 ಬಾರಿಗೆ ಸ್ಪರ್ಧಿಸುತ್ತಿದ್ದಾರೆ.

1962 ರಿಂದ ಧಾರವಾಡ ಲೋಕಸಭೆ ಚುನಾವಣೆಯಲ್ಲಿ ಗೆದ್ದವರಾರು, ಸೋತವರಾರು 

1962 ರಿಂದ 1977 ರ ವರೆಗೆ ಸತತವಾಗಿ ನಾಲ್ಕು ಬಾರಿ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸರೋಜಿನಿ ಮಹಿಷಿ, ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇಂದಿರಾ ಗಾಂಧಿಯವರಿಗೆ ತೀರಾ ಹತ್ತಿರವಾಗಿ ಕೇಂದ್ರ ಸಚಿವರಾಗಿದ್ದರು. 

1977 ರಲ್ಲಿ ನಾಲ್ಕನೇ ಬಾರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಸರೋಜಿನಿ ಮಹಿಷಿ 205627 ಮತ ಪಡೆದು ಆಯ್ಕೆಯಾಗಿದ್ದರು. 1980 ರಲ್ಲಿ ನಡೆದ ಡಿ.ಕೆ.ನಾಯ್ಕರ್ ಅವರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಸ್ಪರ್ಧಿಸಿ 208269 ಮತಗಳನ್ನು ಪಡೆದು ಆಯ್ಕೆಯಾಗಿದ್ದರು.

1984 ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಡಿ ಕೆ ನಾಯ್ಕರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನಿಂದ ಸ್ಪರ್ಧಿಸಿ 229865 ಮತಗಳನ್ನು ಪಡೆದು ಎರಡನೇ ಬಾರಿ ಆಯ್ಕೆಯಾದರು. 1989 ರಲ್ಲಿ ನಡೆದ ಚುನಾವಣೆಯಲ್ಲಿ ಡಿ.ಕೆ.ನಾಯ್ಕರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನಿಂದ ಸ್ಪರ್ಧಿಸಿ 276545 ಮತಗಳನ್ನು ಪಡೆದು ಮೂರನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 1991 ರಲ್ಲಿ ನಡೆದ ಚುನಾವಣೆಯಲ್ಲಿ ಡಿ.ಕೆ.ನಾಯ್ಕರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನಿಂದ ಸ್ಪರ್ಧಿಸಿ 157682 ಮತ ಪಡೆದು ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾದರು.

1977 ರಿಂದ ಸತತವಾಗಿ ಆಯ್ಕೆಯಾಗುತ್ತ ಬಂದಿದ್ದ ಕಾಂಗ್ರೇಸ್ ಗೆಲುವಿಗೆ ವಿಜಯ ಸಂಕೇಶ್ವರ ಅವರು ಬ್ರೇಕ್ ಹಾಕಿದರು. ಅಲ್ಲಿಂದ ಕಾಂಗ್ರೇಸ್ ಹೆಸರಿಲ್ಲದಂತೆ ಹೋಗಿದ್ದು ಇತಿಹಾಸ. ಆ ಕಾಲಕ್ಕೆ ಕತ್ತೆ ನಿಂತರು ಕಾಂಗ್ರೇಸ್ ಗೆಲ್ಲತ್ತೆ ಅನ್ನೋ ಮಾತು ಕೇಳಿ ಬರುತ್ತಿತ್ತು. ಕಾಂಗ್ರೇಸ್ ಪಕ್ಷ ಅಷ್ಟೊಂದು ಬೇರು ಬಿಟ್ಟಿದ್ದ ಕಾಲವದು. 1996 ರಲ್ಲಿ ಕಾಂಗ್ರೇಸ್, ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ ಸಂಕೇಶ್ವರ ಎದುರು ಸೋಲಿಗೆ ಶರಣಾಯಿತು. 

1996 ರಿಂದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯದ್ದೇ ಕಾರುಬಾರು 1996 ರಲ್ಲಿ ಕಾಂಗ್ರೇಸ್ ಭದ್ರಕೋಟೆಯನ್ನು ಭೇದಿಸಿದ್ದ ವಿಜಯ ಸಂಕೇಶ್ವರ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದರು. ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ವಿಜಯ ಸಂಕೇಶ್ವರ 228572 ಮತಗಳನ್ನು ಪಡೆದು ಆಯ್ಕೆಯಾದರು. ಕಾಂಗ್ರೇಸನಿಂದ ಸ್ಪರ್ಧಿಸಿ ನಾಲ್ಕು ಬಾರಿ ಆಯ್ಕೆಯಾಗಿದ್ದ ಡಿ ಕೆ ನಾಯ್ಕರ 149768 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದರು.

1998 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಂದ ಸ್ಪರ್ಧಿಸಿದ್ದ ವಿಜಯ ಸಂಕೇಶ್ವರ, 339660 ಮತಗಳನ್ನು ಪಡೆದು ಎರಡನೇ ಬಾರಿ ಆಯ್ಕೆಯಾದರು.

1999 ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ ಸಂಕೇಶ್ವರ 3,45,197 ಮತ ಪಡೆದು ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾದರು. 2004 ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ, ಪ್ರಲ್ಲಾದ ಜೋಶಿಯವರನ್ನು ಕಣಕ್ಕಿಳಿಸಿತು. ಬಿಜೆಪಿ ಅಭ್ಯರ್ಥಿಯಾಗಿದ್ದ ಜೋಶಿ 385084 ಮತ ಪಡೆದು ಮೊದಲ ಬಾರಿಗೆ ಲೋಕಸಭೆಯ ಮೆಟ್ಟಲು ಹತ್ತಿದರು.

ಅಲ್ಲಿಂದ ಇಲ್ಲಿಯವರೆಗೆ ಪ್ರಲ್ಲಾದ ಜೋಶಿ ಸತತವಾಗಿ ಆಯ್ಕೆಯಾಗುತ್ತ ಬಂದಿದ್ದಾರೆ. ಕೇಂದ್ರ ಸಚಿವರಾಗಿರುವ ಜೋಶಿ, ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಮತ್ತು ಕಲ್ಲಿದ್ದಲು ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.

ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಸಮಿಕರಣದ ಚರ್ಚೆ ಆರಂಭವಾಗಿದ್ದು, ಬಿಜೆಪಿ ಭದ್ರಕೋಟೆ ಅಲ್ಲಾಡಿಸಲು ತೆರೆಮರೆಯ ಕಸರತ್ತು ನಡೆದಿದೆ.

ಜಾತಿ ಸಮಿಕರಣ ಇಲ್ಲಿದೆ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17, 50,000 ಮತದಾರರಿದ್ದು, ಆ ಪೈಕಿ ವೀರಶೈವ ಲಿಂಗಾಯತರು 6 ಲಕ್ಷದಷ್ಟಿದ್ದಾರೆ. ಇನ್ನುಳಿದಂತೆ ಮರಾಠಾ, ಮುಸ್ಲಿಮ್, ಕುರುಬ, ಎಸ್ ಸಿ ಎಸ್ ಟಿ ಸೇರಿ 9 ಲಕ್ಷ ಮತದಾರರಿದ್ದಾರೆ. ಒಂದು ಲಕ್ಷ 20 ಸಾವಿರ , ಕುರುಬ 2 ಲಕ್ಷ, SCST, ಮೂರು ಲಕ್ಷ, ಮುಸ್ಲಿಮ್ 4 ಲಕ್ಷ 20 ಸಾವಿರ, ಇತರೆ ಒಂದು ಲಕ್ಷ 50 ಸಾವಿರ ಮತದಾರರಿದ್ದಾರೆ. ಅಲ್ಲದೆ ಒಂದು ಲಕ್ಷದಷ್ಟು ಬ್ರಾಹ್ಮಣ ಮತದಾರರು ಇದ್ದಾರೆ. 

ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ನಾಲ್ಕರಲ್ಲಿ ಕಾಂಗ್ರೇಸ್ ಹಾಗೂ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿವೆ. ಶಿಗ್ಗಾವಿ, ಕುಂದಗೋಳ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೆ,

ಧಾರವಾಡ ಗ್ರಾಮೀಣ, ಕಲಘಟಗಿ, ಹುಬ್ಬಳ್ಳಿ ಧಾರವಾಡ ಪೂರ್ವ ಮೀಸಲು, ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೇಸ್ ಶಾಸಕರಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೇಸ್ ಗೆ ಬಂದಿರುವ ಸರಾಸರಿ ಮತಗಳ ಪೈಕಿ ಬಿಜೆಪಿ ಅಭ್ಯರ್ಥಿಗಳು 50 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರ ರಾಜ್ಯದ ಅತ್ಯಂತ ಪ್ರತಿಷ್ಟಿತ ಕ್ಷೇತ್ರಗಳಲ್ಲಿ ಒಂದಾಗಿದ್ದು, ಬಿಜೆಪಿ ಸೋಲಿಸಲು ಇನ್ನಿಲ್ಲದ ಪ್ರಯತ್ನ ನಡೆದಿರುವದಂತೂ ಸತ್ಯ. ಸಧ್ಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ವಶದಲ್ಲಿದ್ದು, ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸೃಷ್ಟಿಯಾದಂತೆ ಕಂಡು ಬರುತ್ತಿದೆ. ಮರಳಿ ಬಿಜೆಪಿ ಸೇರಿರುವ ಜಗದೀಶ ಶೆಟ್ಟರ ಹಾಗೂ ಹಾಲಿ ಸಂಸದ ಪ್ರಲ್ಲಾದ ಜೋಶಿ ನಡುವಿನ ಸಂಬಂಧ ಮೊದಲಿನಷ್ಟು ಗಟ್ಟಿಯಾಗಿಲ್ಲದಿದ್ದರು. ಒಂದೇ ಪಕ್ಷದಲ್ಲಿದ್ದಾರೆ.

ಇನ್ನು ಕಾಂಗ್ರೇಸನಲ್ಲಿ ನಾಲ್ಕೈದು ಗುಂಪುಗಳಿದ್ದು, ಒಗ್ಗಟ್ಟು ಪ್ರದರ್ಶನ ಕಬ್ಬಿಣದ ಕಡಲೆಯಾಗಿದೆ.ಧರವಾಡ ಲೋಕಸಭಾ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರವಾಗಿದ್ದು, 2024 ರ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

ಈ ಕ್ಷೇತ್ರದ ಮತ್ತೊಂದು ವಿಶೇಷ ಏನೆಂದರೆ, ಕಾಂಗ್ರೇಸ್ ನಿಂದ ಹಿಂದುಳಿದ ವರ್ಗದವರು  ( ಓ ಬಿ ಸಿ ) ಸ್ಪರ್ಧಿಸಿದಾಗ ಮಾತ್ರ ಕಾಂಗ್ರೇಸ್ ಗೆ ಈ ಕ್ಷೇತ್ರದಲ್ಲಿ ಗೆಲುವಾಗಿದ್ದು ಇತಿಹಾಸ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!