Download Our App

Follow us

Home » ಭಾರತ » ನೇಹಾ ಹಿರೇಮಠ ಕಗ್ಗೊಲೆಗೆ ವೀರಶೈವ ಲಿಂಗಾಯತ ಸಮುದಾಯ ಖಂಡನೆ. ನೇಹಾ ಸಾವಿನ ಮೇಲೆ ಯಾವದೇ ರಾಜಕೀಯ ಪಕ್ಷ, ರಾಜಕಾರಣ ಮಾಡದಂತೆ ಬಂಗಾರೇಶ ಎಚ್ಚರಿಕೆ

ನೇಹಾ ಹಿರೇಮಠ ಕಗ್ಗೊಲೆಗೆ ವೀರಶೈವ ಲಿಂಗಾಯತ ಸಮುದಾಯ ಖಂಡನೆ. ನೇಹಾ ಸಾವಿನ ಮೇಲೆ ಯಾವದೇ ರಾಜಕೀಯ ಪಕ್ಷ, ರಾಜಕಾರಣ ಮಾಡದಂತೆ ಬಂಗಾರೇಶ ಎಚ್ಚರಿಕೆ

ಗುರುವಾರದಂದು ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜ್ ವಿಧ್ಯಾರ್ಥಿನಿ ಕುಮಾರಿ ನೇಹಾ ಹಿರೇಮಠ ಇವಳನ್ನು ಅಮಾನುಷವಾಗಿ ಕೊಲೆಗೈದ ರಕ್ಕಸ, ಫಯಾಜ್ ಎಂಬಾತನಿಗೆ ಉಗ್ರ ಶಿಕ್ಷೆ ನೀಡುವಂತೆ ವೀರಶೈವ ಲಿಂಗಾಯತ ಸಂಘಟನೆ ಆಗ್ರಹಿಸಿದೆ. 

 

ಈ ಕೊಲೆಗಾರನಿಗೆ ಯಾವುದೇ ಕಾರಣಕ್ಕೂ ನ್ಯಾಯಾಲಯ ಜಾಮೀನು ನೀಡದೆ, ಗಲ್ಲುಶಿಕ್ಷೆ ಗೆ ಗುರುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತು ಈ ರೀತಿ ಕೃತ್ಯಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಎನ್ಕೌಂಟರ್ ಕಾಯ್ದೆ ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.

ಪೊಲೀಸ ಅಧಿಕಾರಿಗಳು ಕಾಲೇಜ್ ಗಳ ಸುತ್ತಮುತ್ತ ಇರುವ ಮಾದಕ ವಸ್ತುಗಳ ಪೂರೈಕೆ ಕೇಂದ್ರಗಳ ವಿರುದ್ಧ 

ಕೂಡಲೇ ನಿರ್ಧಾಕ್ಷಿಣವಾಗಿ ಕ್ರಮ ಕೈಗೊಳ್ಳಬೇಕು ಎಂದು ವೀರಶೈವ ಮುಖಂಡ ಹಾಗೂ ಧಾರವಾಡ ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷ ಬಂಗಾರೇಶ ಹಿರೇಮಠ ಆಗ್ರಹಿಸಿದ್ದಾರೆ.

ಇದೇ ವೇಳೆ ಈ ಘಟನೆ ಇಟ್ಟು ಕೊಂಡು ಸತ್ತ ಹೆಣದ ಮೇಲೆ ರಾಜಕೀಯ ಮಾಡುವ ಕೀಳು ಮಟ್ಟಕ್ಕೆ ಯಾವುದೇ ರಾಜಕೀಯ ಪಕ್ಷಗಳು ಇಳಿಯಬಾರದು ಎಂದು ವೀರಶೈವ ಲಿಂಗಾಯತ ಒಳ ಪಂಗಡಗಳ ಒಕ್ಕೂಟ ಎಚ್ಚರಿಸಿದೆ. 

ಬಂಗಾರೇಶ ಹಿರೇಮಠ ಜೊತೆಗೆ ರಾಜಶೇಖರ ಮೆಣಸಿನಕಾಯಿ , ಪ್ರಕಾಶಗೌಡ ಪಾಟೀಲ್ , ಸುರೇಶ ಸವಣೂರ , ವೀರಣ್ಣಾ ಹಿರೇಹಾಳ, ಮಂಜುನಾಥ ಲುತಿಮಠ , ಬಸವರಾಜ ಮೆಣಸಗಿ ,ರವಿ ಸಿದ್ಧಾಟಗಿಮಠ ,ಅಪ್ಪಣ್ಣ ಕಮ್ಮಾರ , ಎಂ ಪಿ ಶಿವಕುಮಾರ , ಮಹಾಂತೇಶ ಮಠದ ,ಹೇಮಲತಾ ಶಿವಮಠ , ಶರ್ಮಾ ಹಿರೇಮಠ , ಪ್ರಶಾಂತ ಮೇಲಿನಮನಿ ಮೃತಪಟ್ಟ ನೇಹಾಗೆ ಕಂಬನಿ ಮಿಡಿದಿದ್ದಾರೆ. 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!