Download Our App

Follow us

Home » ಭಾರತ » “ನಾಲಾಯಕ ಸಂತೋಷ ” ಪದ ಬಳಕೆ. ವಿಜಯೇಂದ್ರ ವಿರುದ್ಧ ಆಕ್ರೋಶ. ನಾಳೆ ಮರಾಠಾ ಸಮಾಜದಿಂದ ಪ್ರತಿಭಟನೆ

“ನಾಲಾಯಕ ಸಂತೋಷ ” ಪದ ಬಳಕೆ. ವಿಜಯೇಂದ್ರ ವಿರುದ್ಧ ಆಕ್ರೋಶ. ನಾಳೆ ಮರಾಠಾ ಸಮಾಜದಿಂದ ಪ್ರತಿಭಟನೆ

ನಾಡಿನ ಏಕೈಕ ಮರಾಠಾ ಸಚಿವ ಸಂತೋಷ ಲಾಡ್ ರನ್ನು ” ನಾಲಾಯಕ ” ಎಂದು ಸಂಭೋಧಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಮರಾಠಾ ಸಮುದಾಯ ಆಕ್ರೋಶಗೊಂಡಿದೆ. 

ಬಿ ವೈ ವಿಜಯೇಂದ್ರ ಮಾತಿನಿಂದ ಸಿಟ್ಟಾಗಿರುವ ಮರಾಠಿಗರು, ಮಿಸ್ಟರ್, ವಿಜಯೇಂದ್ರ ನಾವು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೇವೆ. ನಮ್ಮ ಸಮಾಜದ ನಾಯಕನಿಗೆ ” ನಾಲಾಯಕ ” ಎಂದು ಕರೆಯುವ ಮಟ್ಟಕ್ಕೆ ಹೋಗಿರುವ ತಮಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದ್ದಾರೆ. 

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮರಾಠಾ ಸಮುದಾಯ ” ನಾಲಾಯಕ ” ಯಾರು ” ನಾಯಕ ” ಯಾರು ಅನ್ನೋದನ್ನು ಮರಾಠಿಗರು ತೋರಿಸುತ್ತೇವೆ ಎಂದು ಹೇಳಿದ್ದಾರೆ. 

ಚುನಾವಣೆ ಬಂದಾಗಲೆಲ್ಲಾ, ಬಿಜೆಪಿ ಬೆನ್ನಿಗೆ ನಿಂತಿರುವ ಮರಾಠಾ ಸಮುದಾಯವನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಹುನ್ನಾರ ಬಿಜೆಪಿಯಲ್ಲಿ ನಡೆದಿದೆ ಎಂದು ಮುಖಂಡರು ಅರೋಪಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!