Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಕ್ರಿಮಿನಲ್ ಅಪರಾಧಗಳಿಗೆ ದೇಶಾದ್ಯಂತ ಇಂದಿನಿಂದ ಹೊಸ ಕಾನೂನು ಜಾರಿ. ಹೊಸ ಕಾಯ್ದೆಯ ಮೂರು ಪುಸ್ತಕಗಳ ಕನ್ನಡದಲ್ಲಿ ಪ್ರಕಟ ಮಾಡಿದ ನ್ಯಾಯವಾದಿ ಎಸ್ ಕೆ ನದಾಫ

ಕ್ರಿಮಿನಲ್ ಪ್ರಕರಣಗಳಿಗೆ ಸಂಬಂದಪಟ್ಟಂತೆ ಇಂದಿನಿಂದ ಹೊಸ ಕಾನೂನು ಜಾರಿಗೆ ಬಂದಿದೆ. ಬ್ರಿಟಿಷ ಕಾಲದಿಂದಲೂ ಜಾರಿಯಲ್ಲಿದ್ದ IPC, CRPC ಮತ್ತು Indian Evidence ಕಾಯ್ದೆಗಳನ್ನು ರದ್ದುಗೊಳಿಸಿ, ಅಮೂಲಾಗ್ರ ಬದಲಾವಣೆ ಮಾಡಲಾಗಿದೆ.

ಅವುಗಳ ಬದಲಾಗಿ ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಹೊಸದಾಗಿ ಅನುಷ್ಠಾನಗೊಳ್ಳಲಿವೆ.

163 ವರ್ಷಗಳಷ್ಟು ಹಳೆಯದಾದ ಭಾರತೀಯ ದಂಡ ಸಂಹಿತೆ, 126 ವರ್ಷಗಳಷ್ಟು ಹಳೆಯದಾದ ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳಷ್ಟು ಹಳೆಯದಾದ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲು ಈ ಮೂರು ಕಾನೂನುಗಳು ಜಾರಿಗೆ ಇಂದಿನಿಂದ ಜಾರಿಗೆ ಬಂದಿವೆ. 

ಕನ್ನಡದಲ್ಲಿ ಪ್ರಕಟವಾದ ಹೊಸ ಮೂರು ಕಾಯಿದೆಗಳು ಅತ್ಯಂತ ಜನಪ್ರಿಯಗೊಂಡಿದ್ದು, ಮೂರು ಕಾಯಿದೆಗಳಿಗೆ ಕನಾ೯ಟಕ ಸರಕಾರದ ಕಾನೂನು ಸಚಿವರಾದ ಡಾ:ಎಚ್.ಕೆ. ಪಾಟೀಲ್ ಮುನ್ನುಡಿ ಬರೆದಿದ್ದು, ಗೃಹ ಸಚಿವರಾದ ಡಾ: ಜಿ . ಪರಮೇಶ್ವರ ಇವರು ಶುಭ ಸಂದೇಶ ಬರೆದಿದ್ದಾರೆ.

ಹೊಸ ಕಾನೂನಿಗೆ ಸಂಬಂಧಪಟ್ಟಂತೆ ಗದಗನ ಖ್ಯಾತ ನ್ಯಾಯವಾದಿ ಎಸ್ ಕೆ ನದಾಫ ಇವರ ಸಂಪಾದಕತ್ವದಲ್ಲಿ Karnataka Law Reporter Publication Bangalore ಮೂರು ಪುಸ್ತಕಗಳನ್ನು ಪ್ರಕಟ ಮಾಡಿದೆ. ಈ ಪುಸ್ತಕಗಳಲ್ಲಿ ಹೊಸದಾಗಿ ರೂಪುಗೊಂಡ Sections ಗಳ ಬಗ್ಗೆ ವಿವರವಾಗಿ ಹೇಳಲಾಗಿದೆ.

ಪುಸ್ತಕಗಳು ಗದಗನಲ್ಲಿರುವ ಎಸ್ ಕೆ ನದಾಫ 9845550073 ಇವರ ಹತ್ತಿರ ಲಭ್ಯವಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!