Download Our App

Follow us

Home » ಕಾನೂನು » ಕುಮಾರಸ್ವಾಮಿಯವರ ‘ಋಣಮುಕ್ತ’ ಕಾಯ್ದೆ ಜಾರಿಗೆ ತೊಡಕು. ಕಾನೂನು ಸಂಘರ್ಷದಲ್ಲಿ ಕಾಯ್ದೆ. ಧಾರವಾಡ ಜಿಲ್ಲೆಯಲ್ಲಿ 3 ಸಾವಿರ ಅರ್ಜಿಗಳಿಗೆ ವಿಘ್ನ

ಕುಮಾರಸ್ವಾಮಿಯವರ ‘ಋಣಮುಕ್ತ’ ಕಾಯ್ದೆ ಜಾರಿಗೆ ತೊಡಕು. ಕಾನೂನು ಸಂಘರ್ಷದಲ್ಲಿ ಕಾಯ್ದೆ. ಧಾರವಾಡ ಜಿಲ್ಲೆಯಲ್ಲಿ 3 ಸಾವಿರ ಅರ್ಜಿಗಳಿಗೆ ವಿಘ್ನ

ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆಗಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ತಂದಿದ್ದ ಋಣಮುಕ್ತ ಕಾಯ್ದೆಗೆ ಕಾನೂನು ಸಂಘರ್ಷ ನಡೆದಿದೆ. 

ಋಣಮುಕ್ತ ಕಾಯ್ದೆ ಜಾರಿಗೆ ತಡೆ ನೀಡಬೇಕೆಂದು ಲೇವಾದೇವಿ ಮಾಡುವವರ ಸಂಘ ಹೈಕೋರ್ಟನಲ್ಲಿ ತಡೆಯಾಜ್ಞೆ ತಂದಿದೆ. ಭೂ ಸುಧಾರಣೆ ಕಾಯಿದೆ ಮಾದರಿಯಲ್ಲೇ ಲೇವಾದೇವಿದಾರರಿಂದ ಗ್ರಾಮೀಣ ಭಾಗದ ಬಡ ಜನರ ರಕ್ಷಣೆಗೆ ‘ಋಣಮುಕ್ತ’ ಕಾಯಿದೆಯನ್ನು ಕುಮಾರಸ್ವಾಮಿಯವರ ನೇತೃತ್ವದ ಆಗಿನ ರಾಜ್ಯ ಸರ್ಕಾರ ಈ ಕಾಯ್ದೆ ಜಾರಿಗೆ ತಂದಿತ್ತು. 

‘ಋಣಮುಕ್ತ’ ಮಸೂದೆಯನ್ನು ಸಿದ್ಧಪಡಿಸಿ ರಾಷ್ಟ್ರಪತಿಗೆ ಕಳುಹಿಸಲಾಗಿತ್ತು. ಈ ಮಸೂದೆಗೆ ಜುಲೈ 16ರಂದು ಆಗಿನ ರಾಷ್ಟ್ರಪತಿಗಳು ಸಹಿ ಮಾಡಿದ್ದರು. 

ಭೂ ಸುಧಾರಣೆ ಕಾಯಿದೆ ಮಾದರಿಯಲ್ಲೇ ಲೇವಾದೇವಿದಾರರಿಂದ ಗ್ರಾಮೀಣ ಭಾಗದ ಬಡ ಜನರ ರಕ್ಷಣೆಗೆ ‘ಋಣಮುಕ್ತ’ ಕಾಯಿದೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ಕಾಯ್ದೆ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿತ್ತು. 

ಬಡ್ಡಿಗೆ ಸಾಲಪಡೆದು ನೊಂದ ಬಡವರು 90 ದಿನಗಳ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿಯವರು ಹೇಳಿದ್ದರು. 

ಉಸ್ತುವಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ತಿಳಿಸಿದರು. ಆದರೆ ಮಸೂದೆ ಜಾರಿಗೆ ಬಂದ ಕೇವಲ 5 ತಿಂಗಳ ಅವಧಿಯಲ್ಲಿಯೇ ಹೈಕೋರ್ಟನಿಂದ ತಡೆಯಾಜ್ಞೆ ತಂದ ಪರಿಣಾಮ ಧಾರವಾಡ ಜಿಲ್ಲೆಯ ಮೂರು ಸಾವಿರ ಅರ್ಜಿಗಳಿಗೆ ವಿಘ್ನ ಎದುರಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಾಂಗ್ರೇಸ್ ಸರ್ಕಾರ 5 ವರ್ಷ ಬಂಡೆಯಂತೆ ಭದ್ರ / ಸಿದ್ದರಾಮಯ್ಯ

ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿ ಸಂಭವನೀಯ ಬದಲಾವಣೆಯ ಊಹಾಪೋಹಗಳು ಹೆಚ್ಚುತ್ತಿರುವ ನಡುವೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ‘ಬಲವಾದ ಬಾಂಧವ್ಯ’ ಇದೆ ಎಂದು

Live Cricket

error: Content is protected !!