Download Our App

Follow us

Home » ರಾಜಕೀಯ » ಆರ್ ಎಸ್ ಎಸ್ ವಲಯದಲ್ಲಿ ವಿನೋದ ಅಸೂಟಿ ಹೆಸರು ಪ್ರಸ್ತಾಪ. ಬಿಜೆಪಿಗೆ ಸೆಳೆಯುವ ಬಗ್ಗೆ ಚರ್ಚೆ

ಆರ್ ಎಸ್ ಎಸ್ ವಲಯದಲ್ಲಿ ವಿನೋದ ಅಸೂಟಿ ಹೆಸರು ಪ್ರಸ್ತಾಪ. ಬಿಜೆಪಿಗೆ ಸೆಳೆಯುವ ಬಗ್ಗೆ ಚರ್ಚೆ

ಧಾರವಾಡ ಜಿಲ್ಲೆಯ ಆರ್ ಎಸ್ ಎಸ್ ಪಡಸಾಲೆಯಲ್ಲಿ ಸದ್ದಿಲ್ಲದೇ ಕೆಲವು ರಾಜಕೀಯ ಚರ್ಚೆಗಳು ನಡೆದಿವೆ. 

ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರಿಗೆ ಕಠಿಣ ಸ್ಪರ್ಧೆಯೊಡ್ಡಿದ್ದ ವಿನೋದ ಅಸೂಟಿ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದೆ. 

ಮುಂದೊಂದು ದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಲವಾದ ಸೆಡ್ಡು ಹೊಡೆಯುವ ಶಕ್ತಿ, ಅಹಿಂದ ನಾಯಕನಾಗಿ ಗುರುತಿಸಿಕೊಂಡಿರುವ ವಿನೋದ ಅಸೂಟಿಗೆ ಬರಬಹುದು ಎಂದು ಲೆಕ್ಕಾಚಾರದಲ್ಲಿ ತೊಡಗಿರುವ ಸಂಘದ ಕೆಲವು ಮುಖಂಡರು, ವಿನೋದ ಅಸೂಟಿಯವರನ್ನು ಬಿಜೆಪಿಗೆ ಸೆಳೆಯಲು ಯೋಚಿಸಿದ್ದಾರೆ ಎನ್ನಲಾಗಿದೆ.

ಈ ವಿಚಾರವನ್ನು ಸಂಘದ ಪ್ರಮುಖರು, ನವಲಗುಂದ ಕ್ಷೇತ್ರದ ಆರ್ ಎಸ್ ಎಸ್ ಕಾರ್ಯಕರ್ತರ ಬಳಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ವಿನೋದ ಅಸೂಟಿಯವರಿಗೆ ಕಡೆ ಕ್ಷಣದಲ್ಲಿ ಕಾಂಗ್ರೇಸ್ ಲೋಕಸಭಾ ಟಿಕೇಟ್ ಘೋಷಣೆಯಾದರು, ಅತ್ಯಂತ ಕಠಿಣ ಸ್ಪರ್ಧೆ ಒಡ್ಡಿದ್ದರಿಂದ, ಜೋಶಿಯವರ ಗೆಲುವು ಈ ಸಲ ಅಷ್ಟು ಸುಲಭವಾಗಿರಲಿಲ್ಲ.  ವಿನೋದ ಅಸೂಟಿಯವರನ್ನು ಬಿಜೆಪಿಗೆ ಕರೆತಂದು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡುವ ಬಗ್ಗೆ ಯೋಚಿಸಲಾಗಿದೆ ಎಂಬ ಚರ್ಚೆ ನಡೆದಿದೆ ಎನ್ನಲಾಗಿದೆ. 

ಈ ಹಿನ್ನೆಲೆಯಲ್ಲಿ ಸಂಘದ ಸಭೆಯಲ್ಲಿ ವಿನೋದ ಅಸೂಟಿ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದೆ. ಆದರೆ ವಿನೋದ ಅಸೂಟಿ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರು ಕೂಡಾ ಕ್ಷೇತ್ರದಲ್ಲಿ ಓಡಾಡುತ್ತಿದ್ದು, ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!