ಸ್ವಾತಂತ್ರೋತ್ಸವದಂದೆ ಎಮ್ ಇ ಎಸ್ ಪುಂಡರು ಪುಂಡಾಟಿಕೆ ನಡೆಸಿದ ಘಟನೆ ನಿಪ್ಪಾಣಿಯಲ್ಲಿ ನಡೆದಿದೆ. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಎದುರಲ್ಲಿಯೇ ಈ ಘಟನೆ ನಡೆದಿದ್ದು, ನಗರಸಭೆ ಮೇಲೆ ತ್ರಿವರ್ಣ ದ್ವಜಾರೋಹಣ ಮಾಡಲಾಗಿತ್ತು. ತ್ರಿವರ್ಣ ದ್ವಜದ ಪಕ್ಕವೇ ಭಗವಾ ದ್ವಜ ಹಾರಿಸಲು ಎಮ್ ಈ ಎಸ್ ಪುಂಡರು ಯತ್ನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಮ್ ಇ ಎಸ್ ಪುಂಡರನ್ನು ಹೊರ ಹಾಕಿದ್ದಾರೆ. ಕನ್ನಡದ ನೆಲದಲ್ಲಿ ಮಹಾರಾಷ್ಟ್ರದ ಎಮ್ ಇ ಎಸ್ ಪುಂಡರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
