ಗಡಿನಾಡು ಬಳ್ಳಾರಿಯಲ್ಲಿ ಇಂದು ಆಂದ್ರ ಪ್ರದೇಶದ ಜನಪ್ರಿಯ ನಾಯಕ ಎನ್ಟಿಆರ್ ಪುತ್ತಳಿ ಲೋಕಾರ್ಪಣೆಗೊಂಡಿತು. ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಎನ್ಟಿಆರ್ ಪುತ್ತಳಿ ಅನಾವರಣಗೊಳಿಸಿದರು.
ಕಿಕ್ಕಿರಿದು ಸೇರಿದ್ದ ಜನರತ್ತ ಕೈ ಬೀಸಿದ ನಾಯ್ಡು, ಇದು ಬಳ್ಳಾರಿಯೋ ಅಥವಾ ಆಂಧ್ರಪ್ರದೇಶವೋ ಎಂಬುದು ಗೊತ್ತಾಗುತ್ತಿಲ್ಲ, ಅಷ್ಟೊಂದು ಜನ ಸೇರಿದ್ದೀರಿ ಎಂದು ಶ್ಲಾಘಿಸಿದರು.
ಬಳ್ಳಾರಿಯ ಕಮ್ಮ ದೇವಸ್ಥಾನದ ಬಳಿ 7 ಅಡಿ ಪುತ್ತಳಿಗೆ ಮಾಲೆ ಹಾಕುವ ಮೂಲಕ ಎನ್ಟಿಆರ್ ಕೊಡುಗೆ ಸ್ಮರಿಸಲಾಯಿತು. ಬಳ್ಳಾರಿ ಉಸ್ತುವಾರಿ ಸಚಿವ ಬಿ ನಾಗೇಂದ್ರ, ಶಾಸಕ ಭರತ ರೆಡ್ಡಿ ನಾಯ್ಡು ಅವರಿಗೆ ಸಾಥ ಕೊಟ್ಟಿದ್ದರು.