ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ ಎಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯ ಮಾತಿಗೆ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಇಷ್ಟು ಬೇಗ ಸಾಯುವದು ಬೇಡ, ಅವರು ಬಹಳಷ್ಟು ವರ್ಷ ಬದುಕಬೇಕು ಹಿಂದುಳಿದವರ ಪರ ಹೋರಾಟ ಮಾಡಲಿ ಎಂದು ಈಶ್ವರಪ್ಪ ತಿಳಿಸಿದ್ದಾರೆ.
ನಿಮ್ಮ ಹೆಣ ಬಿಜೆಪಿಗೆ ಬರುವದು ಬೇಡ ಅಂದಿರುವ ಈಶ್ವರಪ್ಪನವರು, ಬಿಜೆಪಿ ಕೃಪಾಕಟಾಕ್ಷದಿಂದ ಮೊದಲ ಸಲ ಸರ್ಕಾರಿ ಕಾರು ಹತ್ತಿದ್ದನ್ನು ಸಿದ್ದರಾಮಯ್ಯ ಮರೆಯಬಾರದು ಎಂದು ಟಾಂಗ ಕೊಟ್ಟಿದ್ದಾರೆ.