ಹುಬ್ಬಳ್ಳಿಯ ಚೆನ್ನಮ್ಮ ( ಇದ್ಘಾ ) ಮೈದಾನದಲ್ಲಿ ಗಣೇಶ ಪ್ರತಿಷ್ಟಾನ ಮಾಡಿಯೇ ಸಿದ್ದ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದ್ದಾರೆ. ಹುಬ್ಬಳ್ಳಿಯ ಚೆನ್ನಮ್ಮ ಮತ್ತು ಬೆಂಗಳೂರಿನ ಚಾಮರಾಜಪೇಟ ಇದ್ಘಾ ಮೈದಾನದಲ್ಲಿಯೂ ಗಣೇಶ ಪ್ರತಿಷ್ಟಾಪನೆ ಮಾಡುವಾದಾಗಿ ಮುತಾಲಿಕ ಹೇಳಿದ್ದಾರೆ. ಹಿಂದೂ ಧಾರ್ಮಿಕ ಹಬ್ಬ ಬಂದಾಗ ಆಚರಣೆ ಮಾಡಲು ಸರ್ಕಾರ ವಿರೋಧ ಮಾಡ್ತಾ ಇದೆ. ಇದು ಬಹಳ ದಿನ ನಡೆಯಲ್ಲ ಅಂತ ಗುಡುಗಿದ್ದಾರೆ. ಹುಬ್ಬಳ್ಳಿಯ ಚೆನ್ನಮ್ಮ ಮೈದಾನ ಮತ್ತು ಬೆಂಗಳೂರಿನ ಚಾಮರಾಜಪೇಟ ಮೈದಾನದಲ್ಲಿ ಮುಸ್ಲಿಂರಿಗೆ ನಮಾಜ ಮಾಡಲು ಅವಕಾಶ ಕೊಡಬಾರದು ಎಂದು ನಾವು ಸಹ ಕೋರ್ಟ ಮೆಟ್ಟಲೇರುತ್ತೇವೆ ಎಂದು ಮುತಾಲಿಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅದೆಂತ ಶಕ್ತಿ ಬಂದರು ಸಹ ನಾವು ಗಣೇಶ ಪ್ರತಿಷ್ಟಾಪನೆ ಮಾಡುವಾದಾಗಿ ಪ್ರಮೋದ ಮುತಾಲಿಕ ಹೇಳಿದ್ದಾರೆ.