ಮಹತ್ವದ ಬೆಳವಣಿಗೆಯಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಟಾಪನೆಗೆ ಪಾಲಿಕೆ ಆಯುಕ್ತರು ಅನುಮತಿ ನೀಡಿದ್ದಾರೆ. ಮೂರು ದಿನಗಳ ಕಾಲ ಗಣೇಶ ಪ್ರತಿಷ್ಟಾಪಿಸಲು ಅನುಮತಿ ನೀಡಲಾಗಿದೆ.
ಕಳೆದ ವರ್ಷದ ನಿಬಂಧನೆಗಳನ್ನು ವಿಧಿಸಿ ಆದೇಶ ಹೊರಡಿಸಲಾಗಿದ್ದು, ಆದೇಶದ ಪ್ರತಿಯನ್ನು ಆಯುಕ್ತ ಈಶ್ವರ ಉಳ್ಳಾಗಡ್ಡಿ, ಶಾಸಕ ಬೆಲ್ಲದ ಅವರಿಗೆ ನೀಡಿದರು.
ಸಪ್ಟೆಂಬರ್ 19 ರಂದು ಗಣೇಶ ಪ್ರತಿಷ್ಠಾಪನೆಯಾಗಲಿದ್ದು, ಬಿಜೆಪಿ ಹೋರಾಟಕ್ಕೆ ಕಡೆಗೂ ಪಾಲಿಕೆ ಆಯುಕ್ತರು ಮಣಿದಿದ್ದಾರೆ.