Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಖ್ಯಾತ ಚಿತ್ರ ಸಾಹಿತಿ, ನಾಗೇಂದ್ರ ಪ್ರಸಾದರಿಗೆ ಸಾಹಿತ್ಯ ರತ್ನ ಪ್ರಶಸ್ತಿ ಘೋಷಣೆ.

ಕನ್ನಡ ಚಲನಚಿತ್ರ ರಂಗದ ಖ್ಯಾತ ಚಿತ್ರ ಸಾಹಿತಿ, ನಿರ್ದೇಶಕ, ಸ್ನೇಹಜೀವಿ, ಡಾ. ವಿ ನಾಗೇಂದ್ರ ಪ್ರಸಾದರಿಗೆ ಡಾ. ಸ.ಜ. ನಾಗಲೋಟಿಮಠ ಸಾಹಿತ್ಯ ರತ್ನ ಪ್ರಶಸ್ತಿ ಘೋಷಣೆಯಾಗಿದೆ. ಡಾ. ವಿ ನಾಗೇಂದ್ರ ಪ್ರಸಾದ, ” ಅಪ್ಪ ಐ ಲವ್ ಯೂ ಪಾ ” ನೀನೇ ರಾಮಾ, ನೀನೇ ಶಾಮಾ ” ನೀನೇ ಅಲ್ಲಾ, ನೀನೇ ಎಲ್ಲಾ ” ಸೇರಿದಂತೆ ಇವರೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಕನ್ನಡ ಚಲನ ಚಿತ್ರ ರಂಗಕ್ಕೆ ಅನೇಕ ಕೊಡುಗೆ ನೀಡಿರುವ ಡಾ. ವಿ ನಾಗೇಂದ್ರ ಪ್ರಸಾದರಿಗೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ.

ಕನ್ನಡ ಚಲನಚಿತ್ರ ಗೀತೆಗಳ ಸಾಮಾಜಿಕ ಪರಿಣಾಮ ಒಂದು ಅಧ್ಯಯನ ಎಂಬ ಪಿ ಹೆಚ್ ಡಿ ಪದವಿಗಾಗಿ ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇದಕ್ಕೆ ಮಂಡಿಸಿದ ಕೃತಿಗೆ ಡಾ ಸ ಜ ನಾ ಸಾಹಿತ್ಯ ರತ್ನ ಪ್ರಶಸ್ತಿ ನೀಡಲಾಗುತ್ತಿದೆ ಪ್ರಶಸ್ತಿ ಮೌಲ್ಯ 25000 ನಗದು ಮತ್ತು ಪಲಕ ಶಾಲುಗಳನ್ನು ಒಳಗೊಂಡಿದೆ ಇದೆ 18 ರಂದು ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನಿದ್ಯದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಪ್ರಶಸ್ತಿ ಪ್ರಧಾನವನ್ನು ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಮಾಡಲಿದ್ದಾರೆ ಎಂದು ಡಾಕ್ಟರ್ ಸ ಜ ನಾ ಅವರ ಮೊಮ್ಮಗಳಾದ ಇಂಪನಾ ಸಂಜಯ ನಾಗಲೋತಿಮಠ ಅವರು ತಿಳಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!