Download Our App

Follow us

Home » ರಾಜಕೀಯ » ಬಡವರ ಕೈ ಸೇರಲಿರುವ 2 ಲಕ್ಷ 32 ಸಾವಿರ ಆಶ್ರಯ ಮನೆಗಳು. ಸರ್ಕಾರದಿಂದಲೇ ಹಣ ಭರ್ತಿಗೆ ತೀರ್ಮಾನ.

ಬಡವರ ಕೈ ಸೇರಲಿರುವ 2 ಲಕ್ಷ 32 ಸಾವಿರ ಆಶ್ರಯ ಮನೆಗಳು. ಸರ್ಕಾರದಿಂದಲೇ ಹಣ ಭರ್ತಿಗೆ ತೀರ್ಮಾನ.

ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ರಾಜೀವ್‌ ಗಾಂಧಿ ವಸತಿ ನಿಗಮದ ವತಿಯಿಂದ ಬಡವರಿಗೆ ಸೂರು ಕಲ್ಪಿಸಲು 2015ರಲ್ಲಿ ರೂಪಿಸಿದ ಯೋಜನೆಯಡಿ ತಲಾ ರೂ.7.50 ಲಕ್ಷ ವೆಚ್ಚದಲ್ಲಿ ಮನೆಗಳ ಸಮುಚ್ಚಯಯವನ್ನು ಫಲಾನುಭವಿಗಳಿಗೆ ನಿರ್ಮಿಸಿಕೊಡುವುದು ಸರ್ಕಾರದ ಕಾರ್ಯಕ್ರಮವಾಗಿತ್ತು. ಈ ಯೋಜನೆಯನ್ವಯ ಸರ್ಕಾರ 3 ಲಕ್ಷ ರೂ. ಸಬ್ಸಿಡಿ ನೀಡಲಿದ್ದು, ಉಳಿದ ಹಣವನ್ನು ಫಲಾನುಭವಿ ಪಾವತಿಸಬೇಕಾಗಿತ್ತು. ಆದರೆ ಅವರಿಗೆ ಬ್ಯಾಂಕ್‌ ಸಾಲ ಲಭ್ಯವಾಗದೆ ಇದ್ದುದ್ದರಿಂದ ಅವರ ಪಾಲಿನ ಹಣ ಗುತ್ತಿಗೆದಾರರ ಕೈಸೇರದೆ 2.32 ಲಕ್ಷ ಮನೆಗಳ ಅರ್ಧಂಬರ್ಧ ನಿರ್ಮಾಣವಾಗಿ ನಿಂತಿದ್ದವು.

ಈ ಮನೆಗಳ ಬಾಕಿ ಹಣವನ್ನು ಸರ್ಕಾರವೇ ಪಾವತಿಸಿ, ಅರ್ಹಕುಟುಂಬಗಳಿಗೆ ಉಚಿತವಾಗಿ ಸೂರು ಒದಗಿಸಲಿದೆ ಎಂದು ವಸತಿ ಸಚಿವ ಬಿ ಝಡ್ ಜಮೀರ ಅಹ್ಮದ ಖಾನ ತಿಳಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳು ಸಹ ಒಪ್ಪಿಗೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

error: Content is protected !!