ಶಿಕ್ಷಣ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ ಧಾರವಾಡದಲ್ಲಿ ಪ್ರತಿಷ್ಟಿತ ಮನೆತನವೊಂದು ವೈದ್ಯಕೀಯ ಕ್ಷೇತ್ರದಲ್ಲಿ ಮೂರು ತಲೆಮಾರುಗಳಿಂದ ಸೇವೆ ಸಲ್ಲಿಸುತ್ತಿದೆ.
ಧಾರವಾಡದಲ್ಲಿ ಡಾ, ಎಸ್ ಆರ್ ರಾಮನಗೌಡರ ಎಂಬ ಖ್ಯಾತ ವೈದ್ಯರು, ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದವರ ಸಾಲಿನಲ್ಲಿ ಸೇರುತ್ತಾರೆ.
ಧಾರವಾಡ, ಬೈಲಹೊಂಗಲ, ಸವದತ್ತಿ, ಹಳಿಯಾಳ ಸೇರಿದಂತೆ ಸುತ್ತ ಮುತ್ತಲಿನ ತಾಲೂಕುಗಳಲ್ಲಿ ಡಾ. ರಾಮನಗೌಡರ ಆಸ್ಪತ್ರೆ ವೈದ್ಯಕೀಯ ರಂಗದಲ್ಲಿ ಹೆಸರು ಮಾಡಿದೆ.
ಡಾ. ಎಸ್ ಆರ್ ರಾಮನಗೌಡರ ಅವರು ವೈದ್ಯರಾದ ನಂತರ ಅವರ ಮೂರು ತಲೆಮಾರಿನವರು ವೈಧ್ಯಕೀಯ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತ ಬಂದಿದ್ದಾರೆ.
ಡಾ. ಎಸ್ ಆರ್ ರಾಮನಗೌಡರ ಅವರ ಮಕ್ಕಳಾದ ಪ್ರಶಾಂತ ರಾಮನಗೌಡರ ಅವರ ಧರ್ಮಪತ್ನಿ ವಾಣಿಶ್ರೀ ವೈದ್ಯರಾಗಿದ್ದಾರೆ.
ಚಿದಾನಂದ ರಾಮನಗೌಡರ ಹಾಗೂ ಅವರ ಧರ್ಮಪತ್ನಿ ದಕ್ಷಾಯಿಣಿ ಸಹ ವೈಧ್ಯರಾಗಿದ್ದಾರೆ.
ಪ್ರಕಾಶ ರಾಮನಗೌಡರ ಹಾಗೂ ಅವರ ಧರ್ಮಪತ್ನಿ ಸ್ಮಿತಾ ಸಹ ವೈಧ್ಯರಾಗಿದ್ದಾರೆ.
ಶ್ರೀಕಾಂತ ರಾಮನಗೌಡರ ಹಾಗೂ ಅವರ ಧರ್ಮಪತ್ನಿ ಸುಷ್ಮಾ ರಾಮನಗೌಡರ ಸಹ ವೈಧ್ಯರಾಗಿದ್ದಾರೆ.
ಇನ್ನು ಡಾ, ಎಸ್ ಆರ್ ರಾಮನಗೌಡರ ಅವರ ಮೂರನೇ ತಲೆಮಾರಿನವರಾದ ನೀಲಸ್ಮೃತಿ ಪ್ರಶಾಂತ ರಾಮನಗೌಡರ ವೈದ್ಯರಾಗಿದ್ದಾರೆ.
ಇರ್ಶಿತಾ ಚಿದಾನಂದ ರಾಮನಗೌಡರ ಎಮ್ ಬಿ ಬಿ ಎಸ್ ಓದುತ್ತಿದ್ದಾರೆ. ನಿಶಿತಾ ಚಿದಾನಂದ ರಾಮನಗೌಡರ ಎಮ್ ಬಿ ಬಿ ಎಸ್ ಮೊದಲನೇ ವರ್ಷದಲ್ಲಿ ಓದುತ್ತಿದ್ದಾರೆ.
ಸಧ್ಯ ದಕ್ಷ ಶ್ರೀಕಂಠ ರಾಮನಗೌಡರ ಹಾಗೂ ವಿಶ್ವಾರಾಧ್ಯ ಪ್ರಕಾಶ ರಾಮನಗೌಡರ ನೀಟ್ ಪರೀಕ್ಷೆ ಪಾಸ್ ಮಾಡಿದ್ದು, ಕ್ರಮವಾಗಿ ರಾಷ್ಟ್ರಮಟ್ಟದಲ್ಲಿ 318 ಹಾಗೂ 1549 ಸ್ಥಾನದಲ್ಲಿ ತೇರ್ಗಡೆಯಾಗಿ ವೈಧ್ಯಕೀಯ ಸೀಟು ಗಿಟ್ಟಿಸಿದ್ದಾರೆ.
ಈ ಮನೆತನದಲ್ಲಿ ಎಲ್ಲರು ವೈಧ್ಯರಾಗಿದ್ದು, ಪ್ರತಿ ವರ್ಷ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿ ಹೆಸರು ಮಾಡಿದ್ದಾರೆ.
