Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ರಂಗಾಯಣ ನಿರ್ದೇಶಕ ಸ್ಥಾನಕ್ಕೆ ರಾಜು ತಾಳಿಕೋಟೆ ನೇಮಕ. ಕೆಲವರಿಗೆ ಹೊಟ್ಟೆಕಿಚ್ಚು……

ಧಾರವಾಡದ ರಂಗಾಯಣಕ್ಕೆ ನಿರ್ದೇಶಕರಾಗಿ ಸರ್ಕಾರ ಖ್ಯಾತ ರಂಗಕರ್ಮಿ ರಾಜು ತಾಳಿಕೋಟೆಯವರನ್ನು ನೇಮಕ ಮಾಡಿದ್ದೆ ತಡ, ಕೆಲವು ಸೋ ಕಾಲ್ಡ್ ರಂಗ ಸಮಾಜದವರಿಗೆ ಹೊಟ್ಟೆಕಿಚ್ಚು ಆರಂಭವಾಗಿದೆ. 

ಕೆಲವರು ಜಾತಿ ಬಣ್ಣ ಲೇಪನ ಮಾಡಿದರೆ, ಅಂತರಾಷ್ಟ್ರೀಯ ಖ್ಯಾತಿಯ, ಅದ್ಭುತ ರಂಗ ನಿರ್ದೇಶಕಿ ರಜನಿ ಗರುಡ, ರಾಜು ತಾಳಿಕೋಟೆಯವರ ನೇಮಕಕ್ಕೆ ” ಕಾಮಿಡಿ ರಂಗಾಯಣ ಧಾರವಾಡ ” ಎಂದು ಹೇಳುವ ಮೂಲಕ ಕುಹುಕದ ಮಾತನ್ನಾಡಿದ್ದಾರೆ. 

ಫೇಸ್ ಬುಕ್ ನಲ್ಲಿ ರಂಗಾಯಣದ ಕುರಿತು ಬರೆದುಕೊಂಡಿದ್ದ ರಜನಿ ಗರುಡರಿಗೆ, ಹಿಂದಿನ ನಿರ್ದೇಶಕ, ಪ್ರಮೋದ ಶಿಗ್ಗಾವ್ ಅವರು ಧಾರವಾಡ ರಂಗಾಯಣದ ಮೇಲೆ ರಂಗ ಸಮಾಜಕ್ಕೆ ತುಂಬಾ ಸಿಟ್ಟಿತ್ತು ಅಂತ ಕಾಣ್ಸತ್ತೆ ಅಂತ ಪ್ರತಿಕ್ರಿಯಿಸಿದ್ದಾರೆ. 

ಇನ್ನು ಕೆಲವರು ಸರ್ಕಾರದ ನಿರ್ಧಾರಕ್ಕೆ ಕಲಿಯುಗದ “ದುಡುಕ” ತನ ಎಂದು ಹೇಳಿದರೆ, ಮತ್ತೊಬ್ಬರು ರಾಜು ತಾಳಿಕೋಟೆಯವರ ವೈಯುಕ್ತಿಕ ಜೀವನದ ಮೇಲೆ ಕೆಲ್ಲೆಸೆದಿದ್ದಾರೆ. ಇಬ್ಬರ ಹೆಂಡರ ಮುದ್ದಿನ ಗಂಡ ಎಂದು ಚೇಷ್ಟೆ ಮಾಡಿದ್ದಾರೆ.

ಈ ಹಿಂದೆ ಪ್ರಕಾಶ ಗರುಡ ಅವರು ನಿರ್ದೇಶಕರಾದಂತ ಸಂದರ್ಭದಲ್ಲಿ ಎಲ್ಲವು ಸರಿಯಿತ್ತಾ? ಅನ್ನೋ ತರದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ರಜನಿ ಗರುಡರನ್ನು ಪ್ರಶ್ನಿಸಲು ಮುಂದಾಗಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!